ಅರ್ಜುನನಾದರೇನು?
ಕೃಷ್ಣ ಶಕುನಿಯ
ಆಟದಲಿ, ನೀನು
ಭೀಷ್ಮನಾದರೇನು?
ಪಗಡೆಯಾಟದ
ಪಗಡೆಯಾಟದ
ಪ್ರವಾಹದಲಿ, ನೀನು
ಈಜಿ ಜಯಿಸಿದರೂ,
ಬೇರೆಲ್ಲವನ್ನು
ಕಳೆದುಕೊಂಡ
ನೆರೆ ಸಂತ್ರಸ್ತ.
ಮನದಾಳದ ಮಾತೊಂದು ಹೊರಬರುವಾಗ,
ನಿನ್ನ ಹೃದಯಕ್ಕೆಡವಿ ಗಂಟಲಲ್ಲೇ ಇಂಗಿಹೋಗಿದೆ.
ಕಣ್ಗಳಿಂದ ಹೊರಹೊಮ್ಮಲ್ಲಿದ್ದ ಭಾವೋದ್ವೇಗದ ನೋಟವೊಂದು
ನಿನ್ನ ನೋಟಕ್ಕೆ ತಾಗಿ, ಕಣ್ಣ ರೆಪ್ಪೆಗಳಲಿ ಮುದುಡಿಹೋಗಿದೆ.
ಏಕಾಂತದಲ್ಲಿ ಮೂಡಿದ ಎಷ್ಟೋ ಭಾವನೆಗಳು, ನಿನ್ನನ್ನೆದುರಿಸದೆ,
ಬೇರಾವೋ ಮಾತುಗಳ ಕಂಬಳಿಯಲ್ಲಿ ಮುಸುಕು ಹಾಕಿವೆ.
ಪ್ರಸ್ತಾಪಿಸಬೇಕೆಂದು ಎನ್ನ ಹೃದಯ ಪುಟಿದೆಬ್ಬಿಸಿದ ಭಾವ,
ನಿನ್ನ ಸ್ನೇಹ ಕಳೆದುಕೊಂಡೀತೆಂದು ಬೆಂದು ಮೂಲೆಯಲ್ಲಡಗಿದೆ.
ಮನದಾಳದ ಆ ಮಾತು ಎಡವಿ ಹೊರಬರುವಾಗ,
ಕಳವಳದ ತೀರದಲ್ಲಿದ್ದ ಎನಗೆ
ಕೈಬೀಸಿ, ಬದುಕಿನ ತಿರುವಿನಲಿ ನೀ ಮರೆಯಾದೆ.
ಜಾತ್ರಿ