Unsung Seagull
21 December 2022
ಅಭಿವ್ಯಕ್ತಿ
ಒಂದು ಗುಂಜಿ
ಶಬ್ದರಾಶಿಗೆ, ಸಾವಿರ
ರುಪಾಯಿ ಅಂತೆ ಈಗೀಗ..
ಹಣದುಬ್ಬರದ ತಡೆಗೆ
ನಾಯಕರ ಆಶ್ವಾಸನೆ-
ಎಲ್ಲರ ಬಾಯಿಗೆ ಬೀಗ.
ಆರ್ಥಿಕ ಹಿನ್ನೆಡೆಗೆ
ಅಭಿವ್ಯಕ್ತಿಯೇ,
ಕಾರಣವಂತೆ
ಸೂತ್ರಗಳ ಪ್ರಕಾರ.
ಕಣ್ಣೀರಿಡುವುದೂ
ದುಬಾರಿ ವ್ಯವಹಾರ.
ಈರುಳ್ಳಿ ಬೆಲೆ ಅದಕೆ
ಮುಗಿಲೇರಿದೆ ಈಗೀಗ.
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment